ಎಷ್ಟು ಕಾಲ?

ಮಹಾ ಅಂದರೆ ಮನುಷ್ಯ ಎಷ್ಟುಕಾಲ ಬದುಕುತ್ತಾನೆ?
ಸಾವಿರ ದಿನವೋ ಒಂದು ದಿನವೋ?
ಒಂದು ವಾರವೋ ಒಂದಷ್ಟು ಶತಮಾನವೋ?
ಸಾಯುವುದರಲ್ಲೆಷ್ಟು ಕಾಲ ಕಳೆಯುತ್ತಾನೆ?
‘ಅನಂತ ಕಾಲ’ ಅಂದರೆ ಎಷ್ಟುಕಾಲ?
ಈ ಯೋಚನೆಗಳಲ್ಲಿ ಮುಳುಗಿ
ಉತ್ತರ ಹುಡುಕಲು ಹೊರಟೆ.
ಹೋಗಿ ಮಹಾ ಗುರುಗಳನ್ನು ಕಂಡೆ.
ಅವರ ಪೂಜೆ ಆಚಾರಗಳೆಲ್ಲ ಮುಗಿಯಲೆಂದು ಕಾದೆ.
ಎಲ್ಲ ಮುಗಿಸಿ ದೇವರನ್ನೋ ದೆವ್ವವನ್ನೋ
ಕಾಣಲು ಹೊರಟರು ಅವರೆಲ್ಲ.
ನನ್ನ ಪ್ರಶ್ನೆ ಕೇಳಿ ಬೇಸತ್ತರು.
ಅವರಿಗೆ ತಿಳಿದದ್ದು ತೀರ ಸ್ವಲ್ಪ.
ಅವರು ಎಷ್ಟಂದರೂ ಮಠದ ಉಸ್ತುವಾರಿ ಅಧಿಕಾರಿಗಳು ತಾನೆ?
ಡಾಕ್ಟರುಗಳು ಕನ್ಸಲ್ಟೇಶನ್ನಿನ ನಡುವೆ ಬಿಡುವು ಮಾಡಿಕೊಂಡು
ನನ್ನ ಕೂರಿಸಿ ಮಾತಾಡಿದರು.
ಕೈಯಲ್ಲಿ ಕತ್ತರಿ, ಚೂರಿ;
ಮೈ ತುಂಬ ಔರೋಮೈಸಿನ್ ವಾಸನೆ.
ದಿನಕ್ಕಿಂತ ಮರುದಿನ ಹೆಚ್ಚು ಬ್ಯುಸಿ.
ಅವರ ಮಾತಿನಿಂದ ತಿಳಿದದ್ದು ಇಷ್ಟು;
ಮೈಕ್ರೋಬುಗಳ ಸಾವು ಮುಖ್ಯವಲ್ಲ…
ದಿನವೂ ಸಹಸ್ರಾರು ಸಾಯುತ್ತವೆ…
ಬದುಕಿ ಉಳಿದವು ವಿಕೃತಿಯ ಲಕ್ಷಣ ತೋರುತ್ತವಲ್ಲ ಅದೇ ಸಮಸ್ಯೆ.
ಭಯವಾಗಿ ಹೆಣ ಸುಡುವಲ್ಲಿಗೆ ಹೋದೆ.
ನದಿಯ ಪಕ್ಕದಲ್ಲಿ ಸುಡುತ್ತಾರೆ,
ಬಣ್ಣ ಬಳಿದ ಹೆಣಗಳು,
ಪುಟ್ಟ ಶರೀರಗಳು,
ಶಾಪದ ಪ್ರಭಾವಳಿ ಹೊತ್ತ
ಅರಸರ ಹೆಣಗಳು,
ವಾಂತಿ ಭೇಧಿ ಬಂದು ಸತ್ತ
ಸುಂದರಿಯರ ಶವಗಳು.
ಹೆಣಗಳ ಬೀಚು,
ನಡುವೆ ದಹನ ಪಾರಂಗತರು.
ಬಿಡುವು ಸಿಕ್ಕಾಗ ಅವರತ್ತ
ನನ್ನ ಪ್ರಶ್ನೆಗಳನ್ನು ಎಸೆದೆ.
‘ನಿನ್ನೊ ಸುಡುತ್ತೇವೆ ಬಾ’ ಅಂದರು.
ಅವರಿಗೆ ತಿಳಿದದ್ದು ಅದೊಂದೇ.
ನಮ್ಮೂರಿಗೆ ಬಂದರೆ ಸ್ಮಶಾನದವರು
ಹೆಂಡ ಹೀರುತ್ತಾ, ನಡುನಡುವೆ ಹೇಳಿದರು :
‘ಒಬ್ಬ ಒಳ್ಳೆ ಹುಡುಗಿಯನ್ನು ಹಿಡಿದುಕೋ
ಈ ಎಲ್ಲ ತರಲೆ ಮರೆತುಬಿಡು.’
ಇಷ್ಟು ಸಂತೋಷವಾಗಿದ್ದವರನ್ನು ನೋಡೇ ಇರಲಿಲ್ಲ.
ಬಾಟಲಿಯ ಮೇಲೆ ಬಾಟಲಿ
ಖಾಲಿ ಮಾಡುತ್ತಾ ಹಾಡಿದರು,
ಮತ್ತೇರಿದರು, ಮಹಾನ್ ಸಂಭೋಗ ಪರಿಣತರು.
ಮನೆಗೆ ಬಂದೆ. ಪ್ರಪಂಚವೆಲ್ಲ ಸುತ್ತಿ
ಮುದುಕನಾಗಿದ್ದೆ.
ಈಗ ಯಾರನ್ನೂ ಕೇಳುವುದಿಲ್ಲ.
ಆದರೆ ದಿನ ಕಳೆದಂತೆ ತಿಳಿಯುವುದು ಕಡಿಮೆಯಾಗುತ್ತಿದೆ.
*****
ಮೂಲ: ಪಾಬ್ಲೋ ನೆರುಡಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರೀಕ್ಷೆಯಲ್ಲಿ ಪರಾಜಿತನಾದ ವಿದ್ಯಾರ್ಥಿಯ ಪ್ರಲಾಪ
Next post ಪತ್ರ – ೬

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys